ಯುವ ಮನಸುಗಳು ಹಾತೊರೆಯುವ ಕನಸುಗಳಿಗೆ ಕನ್ನಡಿಯಾಗುವ ಇಚ್ಛೆಯಿಂದ ಇಲ್ಲೊಂದು ಸಿನಿಮಾ ಚಿತ್ರೀಕರಣದ ಹಂತದಲ್ಲಿ ಸಾಗಿದೆ. ಅದೇ ‘ಬಣ್ಣದ ಕನಸು’. ಯುವಕರ ಕನಸುಗಳಿಗೆ ಬಣ್ಣ ಬಳಿದು ತೆರೆಯ ಮೇಲೆ ತರಲು ಅನು ಆರ್ಟ್ ಕ್ರಿಯೇಷನ್ಸ್ ಸಜ್ಜಾಗುತ್ತಿದೆ.
ಈಗಾಗಲೇ ಸಕಲೆಶಪುರ ಸುತ್ತ ಒಂದು ಹಂತದ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡ ಬೆಂಗಳೂರಿನ ಕಡೆಗೆ ಧಾವಿಸಿದೆ.
ಸೆಗು ಸುಧಾಕರ್ ಅವರ ಪ್ರಥಮ ನಿರ್ಮಾಣದ ಸಿನಿಮಾ ‘ಬಣ್ಣದ ಕನಸು’, ಶ್ರೀನಿವಾಸ್ ಗುಂಡ ರೆಡ್ಡಿ ಅವರ ಚೊಚ್ಚಲ ನಿರ್ದೇಶನದ ಚಿತ್ರವೂ ಹೌದು.
‘ಸಂಚಾರಿ ಹಾಗೂ ‘ಜಟಾಯು’ ಸಿನಿಮಾಗಳಿಂದ ಜನಪ್ರಿಯತೆ ಪಡೆದ ರಾಜ್ ಸೂರ್ಯ ಈ ಚಿತ್ರದ ನಾಯಕ, ಸಂತೋಷ್, ರಿತಿಕ, ಕಾಮನಾ ಸಿಂಗ್, ಆಶಿಷ್ ವಿದ್ಯಾರ್ಥಿ, ಸುಧಾಕರ್ ಪೋಷಕ ಪಾತ್ರಗಳಲ್ಲಿ ಇದ್ದಾರೆ.
ಅನೇಮ್ ವೆಂಕಟ್ ಅವರ ಛಾಯಾಗ್ರಹಣ ಹಾಗೂ ಎಸ್ ವಿ ಮಲ್ಲಿಕ್ ತೇಜ್ ಅವರ ಸಂಗೀತ ಈ ಚಿತ್ರಕ್ಕಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರ ತಂಡ ತಯಾರಿ ಆರಂಭಿಸಿದೆ.